
ನಮಸ್ಕಾರ ಯಲ್ಲರಿಗೂ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಾರ್ಗಸೂಚಿ ಪ್ರಕಾರ ಅನರ್ಹವಾಗಿರುವಂತ BPL ಕಾರ್ಡಗಳನ್ನು ರದ್ದು ಮಾಡುತ್ತಿರುವುದು ಈ ವಿರೋದಕ್ಕೆ ಕಾರಣವಾಗಿರುವುದರಿಂದ ಈ ಕುರಿತು ಕರ್ನಾಟಕ ರಾಜ್ಯ ಸರಕಾರದಿಂದ ಆಹಾರ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ.
ಸಾರ್ವಜನಿಕ ವಲಯದಲ್ಲಿ ಬಡವರಿಗೆ ನೀಡಲಗುತ್ತಿರುವ BPL ಕಾರ್ಡ ರದ್ದು ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದು ಈ ಕುರಿತು ರಾಜ್ಯ ಸರಕಾರದಿಂದ ಅಧಿಕೃತ ಸ್ಪಷ್ಟಿಕರಣದ ಪ್ರಕಟಣೆಯು ಹೊರಡಿಸಲಾಗಿದೆ.
BPL ಕಾರ್ಡ ರದ್ದುಗೊಳಿಸುವುದರ ಕುರಿತಗಿ ರಾಜ್ಯ ಸರಕಾರವು ಆಹಾರ ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿರುವ ಸೂಚನೆಯ ವಿವರವನ್ನು ವಾರ್ತಾ ಇಲಾಖೆಯ ಅಧಿಕೃತ ಎಕ್ಸ್ ಖಾತೆಗಳಲ್ಲಿ ಪ್ರಕಟಿಸಲಾಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
•ಈ ವರ್ಗಕ್ಕೆ ಸೇರಿದವರ BPL ಕಾರ್ಡ್ ರದ್ದುಗೊಳಿಸಲು ಮಾತ್ರ ಸೂಚನೆ ನೀಡಲಾಗಿದೆ
ಆಹಾರ ಇಲಾಖೆಯಿಂದ ಮಾರ್ಗಸೂಚಿಯ ನಿಯಮ ಮೀರಿರುವ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಿ APL ಕಾರ್ಡಗಳಾಗಿ ಬದಲಾವಣೆಯನ್ನು ಮಾಡಲಾಗುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ಅಧಿಕಾರಿಗ ಜೊತೆ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದಿರುವ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣವೇ ವಾಪಸ್ ನೀಡಬೇಕು.
ಬಡತನದ ಕುಟುಂಬಗಳ ಪಡಿತರ ಚೀಟಿಗಳನ್ನು ಸುಮನೇ ರದ್ದು ಮಾಡಿದರೆ ಆಹಾರ ಇಲಾಖೆಯಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಮಾರ್ನಿಂಗ್ ಕೊಟ್ಟಿದ್ದಾರೆ.
•ಇಂಥವರ ಕಾರ್ಡ್ ಮಾತ್ರ ರದ್ದು
ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿರುವಂತ ಸರಕಾರಿ ನೌಕರ ಕುಟುಂಬಕ್ಕೆ ಸೇರಿದವರ BPL ಕಾರ್ಡ ಮಾತ್ರ ರದ್ದು ಮಾಡಲಾಗುತ್ತದೆ.
ಆದಾಯ ತೆರಿಗೆಯನ್ನು ಪಾವತಿ ಮಾಡುವಂತ ಕುಟುಂಬದ BPL ಕಾರ್ಡ ರದ್ದು ಮಾಡುತ್ತಾರೆ ಉಳಿದಂತೆ ವಿನಃ ಕಾರಣ ಅನಗತ್ಯವಾಗಿ ಇತರೆ ಕಾರ್ಡಗಳನ್ನು ರದ್ದು ಮಾಡದಿರಲು ಸೂಚನೆಯನ್ನು ನೀಡಲಾಗಿದೆ.
•ಸಂಪೂರ್ಣ ರೇಷನ್ ಕಾರ್ಡ್ ರದ್ದಾಗುವುದಿಲ್ಲ
ಮಾರ್ಗಸೂಚಿಯ ಪ್ರಕಾರ BPL ಕಾರ್ಡ ಪಡೆಯಲು ಅನರ್ಹರಿದ್ದರೆ ಆ ಕಾರ್ಡ ರದ್ದಾಗಿ ಅಂತಹ ಗ್ರಾಹಕರಿಗೆ APL ಕಾರ್ಡ ನೀಡಲಾಗುತ್ತದೆ ವಿನಃ ಸಂಪೂರ್ಣ ಯಾವ ಕಾರ್ಡ ರದ್ದ ಮಾಡಲಾಗುವುದಿಲ್ಲವೆಂದು ಆಹಾರ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
•ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ ಎಲ್ಲಾ ಸಂಪೂರ್ಣ ಮಾಹಿತಿ ಲಭ್ಯ.
ಇಲ್ಲಿ ಕ್ಲಿಕ್ ಮಾಡಿ http://Ahara Ilake webiste ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಿ ತಮ್ಮ ರೇಷನ್ ಕಾರ್ಡ ಕುರಿತು ಸಂಪೂರ್ಣ ಮಾಹಿತಿಯನ್ನು ಅವರ ಅತಿರ ಪಡೆದುಕೊಳ್ಳಬಹುದು.
•ಆಹಾರ ಇಲಾಖೆ ವೆಬ್ಸೈಟ್ http://Click here